Wednesday, February 16, 2011

ಒಲವು ಸಂಭ್ರಮಿಸುವ ಸಮಯ.....




ನಾನು ನಿನ್ನ ಕಣ್ಣೀರಾದರೆ,
ಕಣ್ಣಂಚಿನಿಂದ ಇಳಿದು
ತುಟಿಯಂಚಿನಲ್ಲಿ ಸಾಯುವೆ,
ನೀನು ನನ್ನ ಕಣ್ಣೀರಾದರೆ,
ನಾನು ಅಳವುದೇ ಇಲ್ಲ,
ನಿನ್ನ ಕಳೆದುಕೊಳ್ಳುವ ಭಯದಿಂದ....

ಒಲವಿನ ಆಪ್ತ ಸಂಗಾತಿ ಎದುರ‍್ದಿದಾಗ, ಮಾತು ಕಿರಿಕಿರಿ ಅನ್ನಿಸುತ್ತದೆ. ಮೌನ ಆವರಿಸುವ ಹೊತ್ತಿಗೆ ಕಂಗಳು ಸಂವಹನ ನಡೆಸುತ್ತವೆ. ಎಲವೂ ಪರಸ್ಪರ ನೋಟದ್ಲಲೇ ವ್ಯಕ್ತವಾದಾಗ, ಜಾರಿ ಹೋಗುತ್ತಿರುವ ಕ್ಷಣಗಳನ್ನು ನ್ಲಿಲಿಸಲು ಮನಸ್ಸು ಹಾತೊರೆಯುತ್ತದೆ. ‘ಈ ಜಗತ್ತಿನ್ಲಲಿ ಇರೋದೇ ಎರಡು ಜೀವಿಗಳು. ನಾನು ಮತ್ತು ನೀನು. ಇಲಿ ಬೇರೆಯವರಿಗೆ ಪ್ರವೇಶ ನಿಷಿದ್ಧ. ಇದು ಅಲಿಖಿತ ನಿಯಮ’ ಎಂಬ ಪುಟ್ಟ ಒಪ್ಪಂದ. ಇಂತಹ ಒಪ್ಪಂದಗಳು ಅಸ್ತಿತ್ವಕ್ಕೆ ಬರುವ ದಿನ: ಫೆಬ್ರುವರಿ ೧೪-ಪ್ರೇಮಿಗಳ ದಿನ.
ಹೌದು! ಬಹುತೇಕ ಪ್ರೇಮಿಗಳನ್ನು ಒಂದುಗೂಡಿಸುವುದೇ ಮತ್ತು ಪರಸ್ಪರ ವಿಶ್ವಾಸ ಮೂಡಿಸುವುದೇ ಈ ರೀತಿಯ ಒಪ್ಪಂದ. ‘ನನಗೆ ನೀನು, ನಿನಗೆ ನಾನು’ ಎಂದು ಹೇಳಿಕೊಂಡು ಭಾಂಧವ್ಯದ ಕೊಂಡಿಯೊಂದು ಬೆಸೆದುಕೊಳ್ಳಲು ಪ್ರೇಮಿಗಳು ಆಯ್ಕೆ ಮಾಡಿಕೊಳ್ಳುವ ದಿನ ಫೆಬ್ರುವರಿ ೧೪. ಸಂತ ವ್ಯಾಲೆಂಟೈನ್ ಹೆಸರಿನ್ಲಲಿ ಆಚರಿಸಲಾಗುವ ಈ ದಿನವನ್ನು ಪ್ರತಿಯೊಬ್ಬ ಪ್ರೇಮಿಯೂ ಸಂಭ್ರಮಿಸದೇ ಇರುವುದಿಲ್ಲ.

೨೪ ಗಂಟೆಗಳೇನೂ,
ಇಡೀ ಜೀವನವನ್ನೇ ಸಮರ್ಪಿಸುವೆ,
ನಿನ್ನ ಆ ಮುಗುಳ್ನಗುವಿನ
ಒಂದು ಕ್ಷಣಕ್ಕಾಗಿ.....

‘ನೀನು ನನ್ನ ಜೊತೆಯ್ದಿದರೆ ಸಾಕು, ಇಡೀ ಜಗತ್ತನ್ನೇ ಎದುರಿಸುತ್ತೇನೆ’ ಎಂದು ಹೇಳಿಕೊಳ್ಳಲು ಅವಕಾಶ ಕೊಡುವ ಈ ದಿನವನ್ನು ಒಬ್ಬೊಬ್ಬರು ಒಂದೊಂದು ರೀತಿಯ್ಲಲಿ ಆಚರಿಸುತ್ತಾರೆ. ಕೆಲವರು ಒಲವಿನ ಸಂಗಾತಿಯ ಜೊತೆ ಇಡೀ ದಿನ ಕಳೆದುಬಿಟ್ಟರೆ, ಇನ್ನೂ ಕೆಲವರು ಶುಭಾಶಯ ಪತ್ರ-ಹೂಗಳನ್ನು ಕೊಟ್ಟು ಪ್ರೀತಿ ಹಂಚಿಕೊಳ್ಳುತ್ತಾರೆ. ಕೆಲಸದ ಜಂಜಾಟ ಮತ್ತು ಪೋಷಕರ ಭಯವ್ದಿದರೆ, ಮೊಬೈಲ್ ಫೋನ್‌ನ್ಲಲಿ ಪುಟ್ಟ ಪುಟ್ಟ ಎಸ್‌ಎಂಎಸ್‌ಗಳನ್ನು ಕಳುಹಿಸುವ ಮೂಲಕ ಪರಸ್ಪರ ಒಲವಿನ ದಿನದ ಶುಭಾಶಯ ಹೇಳಿಕೊಳ್ಳುತ್ತಾರೆ.
ಕಾಲೇಜುಗಳ್ಲಲಿ ಹುಡುಗಿಯರು ಹೆಚ್ಚಿನ ಸಂಖ್ಯೆಯ್ಲಲಿ ಕಾಣದ್ದಿದರೂ ಹುಡುಗರ ದಂಡು ಮಾತ್ರ ಭಾರಿ ಸಂಖ್ಯೆಯ್ಲಲಿರುತ್ತದೆ. ಒಬ್ಬನ ಕೈಯ್ಲಲ್ದಿದರೆ ಕೆಂಗುಲಾಬಿಯ್ದಿದರೆ, ಇನ್ನೂಬ್ಬ ಕೈಯ್ಲಲಿ ಪುಟ್ಟದಾದ ಚೀಟಿ. ಇಂಥವರ ನಡುವೆ ಕೆಲ ಜಾಣರೂ ಇರುತ್ತಾರೆ. ಕೆಂಗುಲಾಬಿ ನೀಡಿದ ನಂತರವೂ ಪ್ರೀತಿ ಸಿಗದ್ದಿದರೇನು, ಸ್ನೇಹವಾದರೂ ಸಿಗಲಿ ಎಂದು ಮರೆಯ್ಲಲಿ ಹಳದಿ ಗುಲಾಬಿ ಹಿಡಿದಿರುತ್ತಾರೆ.


ಬಯಸಿದ್ದೆಲ್ಲವೂ ಸಿಕ್ಕಿತು ನನಗೆ
ನೆಮ್ಮದಿ, ಶಾಂತಿ ಮತ್ತು ಸ್ಫೂರ್ತಿ,
ಇದಕ್ಕೆ ಕಾರಣ ಹುಡುಕಲೆತ್ನಿಸಿದಾಗ,
ಕಂಡಿದ್ದು ನೀನು ಮತ್ತು ನಿನ್ನ ಒಲವು....

ಆದರೆ ಪ್ರೀತಿ ಎಂಬುದು ಹುಡುಗಾಟಿಕೆ-ತುಂಟಾಟ ಅಷ್ಟೇ ಅಲ. ವ್ಯಕ್ತಿಯೊಬ್ಬನನ್ನು ನಂಬಿ ಇಡೀ ಜೀವನವನ್ನೇ ಸಮರ್ಪಿಸುವಂತೆ ಮಾಡುವ ಅಗಾಧ ಶಕ್ತಿ ಪ್ರೀತಿ. ಸಣ್ಣಪುಟ್ಟ ಮುನಿಸು-ವಿರಸದ ನಡುವೆಯೂ ದಿಢಿ ರ್‌ನೇ ನಗು ತರಿಸಬ್ಲಲ ಸಂಕೇತ ಪ್ರೀತಿ. ಕಾಲೇಜು ವಿದ್ಯಾರ್ಥಿಗಳ್ಲಲಿನ ಪ್ರೀತಿ-ಪ್ರೇಮ ಕೆಲ ವರ್ಷಗಳ ನಂತರ ಅಚ್ಚರಿ ಮೂಡಿಸದೇ ಇರುವುದ್ಲಿಲ. ಬಹುತೇಕ ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರೀತಿಯನ್ನು ಕಳೆದುಕೊಳ್ಳುವುದು ಅಥವಾ ಪಡೆದುಕೊಳ್ಳವುದೇ ಕಾಲೇಜಿನ ದಿನಗಳಲ್ಲಿ.
ಅದೇ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡು ದೊಡ್ಡ ವ್ಯಕ್ತಿಯಾಗಿ ಕಾಲೇಜು ದಿನಗಳನ್ನು ನೆನಪಿಸಿಕೊಂಡರೆ ತಮ್ಮ ಪ್ರೀತಿ-ಪ್ರೇಮದ ಕ್ಷಣಗಳನ್ನು ಕಂಡು ಮನದಲ್ಲೇ ನಗುತ್ತಾರೆ. ಹುಚ್ಚು ಮತ್ತು ಅತಿರೇಕದ ಪ್ರೇಮದ ಕ್ಷಣಗಳನ್ನು ಪದೇ ಪದೇ ಕೆದಕುತ್ತಾರೆ.

ಆತಂಕವಿದ್ದರೂ ಪುಟ್ಟ ಧೈರ್ಯ
ಸೋಲಿನಲ್ಲೂ ಚಿಕ್ಕ ಗೆಲುವು
ಅವಮಾನದಲ್ಲೂ ಕಿರಿದಾದ ಆತ್ಮವಿಶ್ವಾಸ
ಈ ಎಲವನ್ನೂ ಕಲಿಸಿದ ನಿನ್ನ ಮರೆಯುವುದು ಸಾಧ್ಯವೇ?...

ಒಬ್ಬ ವ್ಯಕ್ತಿಯಿಂದ ಭೌತಿಕವಾಗಿ ಏನೂ ಸಿಗದ್ದಿದರೂ ಚಿಂತೆಯ್ಲಿಲ. ‘ಜೊತೆಯಿರುತ್ತೇನೆ, ಪ್ರತಿ ಕ್ಷಣವೂ ಮತ್ತು ಪ್ರತಿ ಹೆಜ್ಜೆಯ್ಲಲೂ’ ಎಂಬ ಮಾತು ವ್ಯಕ್ತಿಯ ಬಲ ತುಂಬುವುದ್ಲಲದೇ ಮಾನಸಿಕ ಸ್ಥೈರ್ಯ ನೀಡಲು ಸಹ ಕಾರಣವಾಗುತ್ತದೆ. ಇಡೀ ಜಗತ್ತು ತನ್ನ ಮೇಲೆ ನಂಬಿಕೆ ಕಳೆದುಕೊಂಡರೂ ಮತ್ತು ಪದೇ ಪದೇ ಅವಮಾನ ಮಾಡಿದರೂ ಬೇಸರವ್ಲಿಲ. ‘ಪ್ರೀತಿಸಿದ ಸಂಗಾತಿ ನನ್ನ ಮೇಲೆ ವಿಶ್ವಾಸ ಕಳೆದುಕೊಂಡ್ಲಿಲ, ಅವಮಾನದ ನೆಪವನ್ನೊಡ್ಡಿ ದೂರವಾಗ್ಲಿಲ’ ಎಂಬ ಭಾವನೆ ಮನಸ್ಸಿನ್ಲಲಿ ಮೂಡಿದರೆ ಸಾಕು. ಹೋದ ಜೀವ ಮತ್ತೆ ಬಂದಂತೆ, ಕಳೆದು ಹೋಗಿದ್ದ ಆತ್ಮವಿಶ್ವಾಸ ಮತ್ತೆ ಸಿಕ್ಕಂತೆ.

ನನ್ನ ಪ್ರೀತಿ, ಪ್ರೇಮ, ಒಲುಮೆ ನಿನಗೆ
ಒಂದರ್ಥದಲ್ಲಿ ಎಲ್‌ಐಸಿ ಬಾಂಡ್ ಇದ್ದಂತೆ,,
ಇರುತ್ತದೆ ಪ್ರತಿಕ್ಷಣ,
ಜೀವನದ ಜೊತೆಗೂ, ಜೀವನದ ನಂತರವೂ....

ಈ ಒಂದು ಮಾತಿಗಾಗಿ ಎದುರು ನೋಡುವ ಸಂಗಾತಿಗೆ ಜೀವನದ ನಂತರವೂ ನಂಟು ಉಳಿಸಿಕೊಳ್ಳುವ ಹಂಬಲ. ಪುನರ್‌ಜನ್ಮ ಎಂಬುದರ‍್ಲಲಿ ನಂಬಿಕೆ ಇಲದ್ದಿದರೂ ಮತ್ತು ಅದು ಅಸಹಜ ಎಂಬ ಅಳುಕು ಪದೇ ಪದೇ ಕಾಡುತ್ತ್ದಿದರೂ ಮನಸ್ಸು ‘ನಮ್ಮ ಪ್ರೇಮ ಅತೀತ ಮತ್ತು ಅಮರ’ ಎಂದು ಪಿಸುಗುಡುತ್ತಿರುತ್ತದೆ.

Sunday, January 23, 2011

ಪ್ರಕರ ಸೂರ್ಯ ಮುಳುಗಿದ ನಂತರ... ಆಕಾಶದಲ್ಲಿ ಬಣ್ಣದ ಚಿತ್ತಾರ


ದಿನಪೂರ್ತಿ ಪ್ರಕರವಾಗಿ ಉರಿದರೂ ಸ್ವಲ್ಪವೂ ಬಳಲಿಕೆಯನ್ನು ತೋರ್ಪಡಿಸದೇ ನಿಧಾನವಾಗಿ ಅತ್ತ ಸೂರ್ಯ ಕಣ್ಮರೆಯಾಗುತ್ತಿದ್ದರೆ, ಇತ್ತ ಅದಕ್ಕಾಗಿ ಕಾತರವಾಗಿದ್ದವು ಎಂಬಂತೆ ಬಾನಂಗಳದ ಬಣ್ಣಗಳು ಜೀವ ತಳೆಯುತ್ತಿದ್ದವು. ಆಹಾರ ಹುಡುಕುತ್ತ ದೂರದೂರಕ್ಕೆ ಹೋಗಿದ್ದ ಚಿಲಿಪಿಲಿ ಹಕ್ಕಿಗಳು ಗೂಡಿಗೆ ಮರಳುತ್ತಿದ್ದರೆ, ಅರಳಿದ್ದ ಹೂಗಳು ಕಣ್ಣಿನ ರಪ್ಪೆ ಮುಚ್ಚಿಕೊಳ್ಳುವಂತೆ ಪಕಳೆಯನ್ನು ಸೆಳೆದುಕೊಳ್ಳುತ್ತಿದ್ದವು. ಇಡೀ ದಿನದ ಜಂಜಾಟ, ಓಡಾಟ ಎಲ್ಲವನ್ನೂ ಆ ಕ್ಷಣಕ್ಕೆ ಮರೆತು ಹಿರಿಯರು ಮನೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಕಿರಿಯರು ಇಷ್ಟು ಸಮಯ ಸಿಕ್ಕಿದ್ದೇ ಸಂಭ್ರಮ ಎಂಬಂತೆ ಆಟ-ತುಂಟಾಟದಲ್ಲಿ ನಿರತರಾಗಿದ್ದರು. ಭಾನುವಾರದ ಸಂಜೆ ಎಂದಿನಂತಿರಲಿಲ್ಲ. ಆಕಾಶದತ್ತ ನೋಡಿದರೆ, ಕೆಲ ನಿಮಿಷಗಳಿಗಾದರೂ ಇಡೀ ದಿನದ ದುಗುಡ, ಆತಂಕ ಎಲ್ಲವನ್ನೂ ಕೆಲ ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ, ನೆಮ್ಮದಿ-ನಿರಾಳಭಾವದಿಂದ ಇರಲು ಮನಸ್ಸು ಬಯಸುತಿತ್ತು.
ಭೂಮಿಯಲ್ಲಿನ ಎಲ ಚಲನವಲನಗಳನ್ನು ಮರೆತು ಆಕಾಶವನ್ನು ಅಪ್ಪಿಕೊಳ್ಳುವ ಹಾಗೆ ನೋಡುತ್ತ್ತ ನಿಂತರೆ, ಪರಿಣಿತ ಕಲಾವಿದನೊಬ್ಬ ಇಡೀ ಆಕಾಶವನ್ನೇ ಕ್ಯಾನ್ವಸ್ ಮಾಡಿಕೊಂಡು ಚಿತ್ತಾರ ಮೂಡಿಸಿದ್ದಾನೆ ಎಂಬ ಅರ್ಥ ವ್ಯಕ್ತವಾಗುವತಿತ್ತು. ಸಾಲು ಸಾಲು ಮರಗಳ ನಡುನಡುವೆ ಇಣುಕುವ ನೀಲಿ ಮಿಶ್ರಿತ ಚೆಂದದ ಕೆಂಪು ಬಣ್ಣ್ಣ, ಗಾಳಿ ಬೀಸಿದಾಗಲ್ಲೆಲ ಮಿಸುಕಾಡುತ್ತಿದ್ದ ಎಲೆಗಳು ಒಂದೊಂದೇ ಭಾವವನ್ನು ಸಂಕೋಚದಿಂದಲೇ ತಿಳಿಪಡಿಸುತ್ತಿದ್ದವು. ಪ್ರಕರ ಸೂರ್ಯ ಕೆಲ ಹೊತ್ತು ದೂರವಾದರೇನು ಸೌಂದರ್ಯ ಕಳೆಗುಂದುವುದಿಲ್ಲ ಎಂದು ಆಕಾಶ ತನ್ನ ಬಣ್ಣಗಳ ಮೂಲಕ ಸಾದರಪಡಿಸಿದರೆ, ಕತ್ತಲು ಆವರಿಸಿದರೂ ಜೀವಸಂಕುಲದ ಸಂಚಲನ ನ್ಲಿಲುವುದ್ಲಿಲ ಎಂದು ಎಲೆಗಳು ಮಿಸುಕಾಟದ್ಲಲೇ ತಿಳಿಸುತ್ತ್ದಿದವು. ಈ ಎಲದಕ್ಕೂ ಸಾಕ್ಷಿ ಎಂಬಂತೆ ಕತ್ತಲು ಆವರಿಸುತ್ತಿದ್ದಂತೆ ಕೀಟಗಳು ಕಿರ್ರನೆ ಶಬ್ದ ಮಾಡತೊಡಗಿದವು.
ಮುಂಜಾವಿನ ಮಂಜು ಮತ್ತು ರಾತ್ರಿಯ ಚಳಿಯನ್ನು ಆವರಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯು ಭಾನುವಾರ ಸಂಜೆಯ ಸವಿಯನ್ನು ಸಹ ಅನುಭವಿಸಿತು. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತ್ಲಾಲೂಕುಗಳ ಗಡಿಭಾಗದ್ಲಲಿ ನಿಂತು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದಾಗ, ದೂರದ್ಲಲಿ ಎಲೋ ಆಕಾಶ-ಭೂಮಿ ಮಿಳಿತವಾದಂತೆ ಅದಕ್ಕೆ ಬಗೆಬಗೆಯ ಬಣ್ಣಗಳು ಕಾರಣವಾದಂತೆ ಕಂಡು ಬರುತ್ತಿದ್ದವು. ಕೆಲ ಹೊತ್ತು ದಿಟ್ಟಿಸಿ ನೋಡಿದರೆ, ಬಣ್ಣಗಳು ಪರಸ್ಪರ ಮಾತನಾಡಿಕೊಂಡು ಭೂಮಿಯ ಮೇಲೆ ನೀರಿನಂತೆ ಹರಿಯಲು ಯೋಜನೆ ರೂಪಿಸುತ್ತಿವೆ ಎಂಬಂತೆ ಸಣ್ಣ ಅನುಮಾನ ವ್ಯಕ್ತವಾಗುತಿತ್ತು. ಒಂದು ವೇಳೆ ಹಾಗೆ ನೀರು ಹರಿದು ಬಂದಲ್ಲಿ, ಅದನ್ನು ಪುಟ್ಟದಾದ ಡಬ್ಬಿಯಲ್ಲಿ ಹಿಡಿದಿಟ್ಟುಕೊಳ್ಳಲು ತುಂಟ ಮನಸ್ಸು ಸಂಚು ನಡೆಸಿತ್ತು.
ಕವಿ ಮನಸ್ಸಿನವರು, ಜನಸಾಮಾನ್ಯರು ಹೀಗೆ ರೋಮಾಂಚನದಿಂದ ಬೇರೆ ಬೇರೆ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿದ್ದರೆ ವಿಜ್ಞಾನಿಗಳು. ಭೂಗೋಳ ಅರಿತುಕೊಂಡವರು ಬೇರೆಯದ್ದೇ ವಾದ ಮಂಡಿಸುತ್ತಿದ್ದರು. ಸೂರ್ಯ ಮುಳುಗುವ ಹೊತ್ತು ಹೀಗೆ ಚೆಂದ ಕಾಣಲು ಹಲವು ಕಾರಣಗಳಿವೆ. ಕವನದ ಸಾಲುಗಳಲ್ಲಿ ಅಲ್ಲ, ವೈಜ್ಞಾನಿಕ ಅಂಶಗಳಿಂದಲೇ ತಿಳಿದುಕೊಳ್ಳಬೇಕು ಎಂಬುದು ಅವರು ಅನಿಸಿಕೆ. ಅದಕ್ಕಾಗಿ ವೈಜ್ಞಾನಿಕ ಕಾರಣಗಳನ್ನು ಆಗು-ಹೋಗುಗಳನ್ನು ಸಹ ಅವರು ಬಿಡಿಸಿಟ್ಟರು.
’ಬೆಳಕು ತನ್ನ ಹಾದಿಯಲ್ಲಿಯ ನಿಲಂಬಿತ ಸೂಕ್ಷ್ಮಕಣಗಳೊಂದಿಗೆ ವರ್ತಿಸಿ ದಿಕ್ಕು ಬದಲಾಯಿಸಿಕೊಳ್ಳುವುದಕ್ಕೆ ಬೆಳಕಿನ ಚೆದರಿಕೆ ಎಂಬ ಹೆಸರು. ಆಕಾಶದ ನೀಲಿ ಬಣ್ಣವು ನಿಲಂಬಿತ ಧೂಳುಕಣಗಳಿಂದ ಉಂಟಾಗುವ ಬೆಳಕಿನ ಚೆದರಿಕೆಯಿಂದಲೇ ಆಗಿರುವುದು’ ಎಂದು ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ.
’ಮುಳುಗುವ ಸಮಯದಲ್ಲಿ ದಿಗಂತಕೆ ಸೂರ್ಯ ಸಮೀಪವಿರುತ್ತಾನೆ. ಆಗ ಬೆಳಕಿನ ಕಿರಣಗಳು ಭೂಮಿಯ ವಾತಾವರಣದಲ್ಲಿ ಹೆಚ್ಚು ದೂರ ಹಾಯಬೇಕಾಗುತ್ತದೆ. ಆದ್ದರಿಂದ ಹೆಚ್ಚು ಸಂಖ್ಯೆಯ ಧೂಳು ಕಣಗಳು ಅಣುಗಳು ಚೆದರಿಕೆಯನ್ನು ಉಂಟುಮಾಡುತ್ತವೆ. ನೀಲಿ ಮತ್ತು ನೇರಳೆ ಬೆಳಕು ಸೂರ್ಯನನ್ನು ನಾವು ನೋಡುವ ದಿಕ್ಕಿಗೆ ಲಂಬವಾಗಿ ಚದುರಿಹೋಗುತ್ತವೆ. ಕಡಿಮೆ ಆವರ್ತಾಂಕದ ಕೆಂಪು ಬೆಳಕು ಹೆಚ್ಚು ಚದರದೆ ನೇರವಾಗಿ ಬರುತ್ತದೆ. ಇದರಿಂದಲೇ ಸೂರ್ಯ ಕಿತ್ತಳೆ ಕೆಂಪಾಗಿ ಕಾಣಿಸುವುದು’ ಎಂದು ಅವರು ಹೇಳಿದರು.
ಸೂರ್ಯ ಮೂಡುವಾಗ ಇರುವುದಕ್ಕಿಂತ ಮುಳುಗುವಾಗ ಈ ಬಣ್ಣಗಳ ಬೆಡಗು ಹೆಚ್ಚು. ಏಕೆಂದರೆ ಹಗಲಿನಲ್ಲಿ ಮಾನವ ಸೇರಿದಂತೆ ಎಲ್ಲ ಜೀವಿಗಳ ಚಟುವಟಿಕೆಯಿಂದಾಗಿ ಸೂರ್ಯ ಮುಳುಗುವ ಹೊತ್ತಿಗೆ ವಾತಾವರಣದಲ್ಲಿ ಧೂಳು ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಭೂಮಟ್ಟದ ಮೋಡವೆನ್ನಬಹುದಾದ ಮಂಜು ಆವರಿಸಿರುತ್ತದೆ. ಭೂಮಿಯ ಉಷ್ಣತೆಯನ್ನು ರಕ್ಷಿಸುವ ಮೋಡದ ಮುಸುಕು ಇರುವುದಿಲ್ಲ. ಹಾಗಾಗಿ ಆಗಸದಲ್ಲಿ ಬಣ್ಣದ ಓಕುಳಿಗೆ ಅದ್ಭುತ ಕ್ಯಾನ್ವಸ್ ಸಿಕ್ಕಿಬಿಡುತ್ತದೆ’ ಎಂದು ಅವರು ತಿಳಿಸಿದರು.

ಹೊಸ ವರ್ಷ ಆಗಮನ.... ಸಂತಸ, ಸಂಭ್ರಮ, ನೆಮ್ಮದಿಯ ನಿರೀಕ್ಷೆ


ಕತ್ತಲ ಕಣಿವೆಯ ತುದಿಯ್ಲಲೊಂದು ಬೆಳಕ ಮೂಡಿದಂತೆ, ಬಾಯಾರಿದವನಿಗೆ ದೂರದ್ಲಲಿ ನದಿಯೊಂದು ಕಂಡಂತೆ, ಕಾನನದ್ಲಲಿ ಪ್ರಾಣಿಗಳ ಘರ್ಜನೆಯ ನಡುವೆ ಹಕ್ಕಿಗಳ ಚಿಲಿಪಿಲಿ ಕೇಳಿದಂತೆ, ಎಲವನ್ನೂ ಕಳೆದುಕೊಂಡ ನಂತರವೂ ವಿಶಿಷ್ಟವಾದ್ದದು ಸಿಕ್ಕಂತೆ, ಹಲವು ಆತಂಕ-ಅಸಮಧಾನಗಳ ನಡುವೆ ನೆಮ್ಮದಿ ಕಂಡುಕೊಂಡಂತೆ
....ನವ ವರ್ಷ ಬಂದಿದೆ. ೨೦೧೦ಕ್ಕೆ ವಿದಾಯ ಹೇಳಿ ಬಂದಿರುವ ನೂತನ ವರ್ಷ ಹಲವು ಆಶೋತ್ತರ, ಸಂಭ್ರಮ ಮತ್ತು ಸಂತೋಷವನ್ನು ಹೊತ್ತು ತಂದಿದೆ. ಸಮಸ್ಯೆ-ಸಂಕಷ್ಟಗಳು ಆಯಾ ವರ್ಷದ ಕಡೆಯ ದಿನದಂದೇ ಕೊನೆಯಾಗಲಿ ಎಂದು ಹರಿಸುತ್ತಿರುವವರಿಗೆ ಪೂರಕರವಾಗಿ ಬಂದಿರುವ ಈ ವರ್ಷ ಹಲವು ನಿರೀಕ್ಷೆಗೂ ಕಾರಣವಾಗಿದೆ.
ಈ ವರ್ಷ ಹೇಗಾದರೂ ಕಷ್ಟಪಟ್ಟು ಮನೆ ಕಟ್ಟಿಸಬೇಕು ಎಂಬ ಗುರಿ ಒಬ್ಬರಲ್ಲಿದ್ದರೆ, ಎಂಥ್ದದೇ ಅಡಚಣೆಗಳು ಎದುರಾದರೂ ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಹಠ ಮತ್ತೊಬ್ಬರಲ್ಲಿ. ಬರುವ ಸಣ್ಣ ಪ್ರಮಾಣದ ಸಂಬಳದಲ್ಲಿ ತಾಯಿ-ತಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಹಂಬಲ ಮಗನಿಗೆ ಇದರೆ, ಒಳ್ಳೆಯ ಹುಡುಗನನ್ನು ನೋಡಿ ಮಗಳ ಮದುವೆ ಮಾಡಬೇಕು ಎಂದು ಅಪ್ಪನ ಚಿಂತೆ. ಬಸ್-ಟ್ರೇನ್‌ಗಳು ಸಾಕು, ಕಾರ್‌ನಲ್ಲಿ ಹೋಗುವ ಕನಸು ಒಬ್ಬರಿಗ್ದಿದರೆ, ದೇಶ ಸುತ್ತಿದ್ದು ಸಾಕು-ವಿದೇಶ ನೋಡಬೇಕು ಎಂಬ ಆಶಯ ಮತ್ತೊಬ್ಬರಿಗೆ. ಪರೀಕ್ಷೆಯ ಚಿಂತೆ ಮಕ್ಕಳಿಗೆ ಇದರೆ, ಘಟಿಕೋತ್ಸವದ್ಲಲಿ ಚಿನ್ನದ ಪದಕ ಗೆಲ್ಲುವ ಸಂಭ್ರಮ
ಸ್ನಾತಕೋತ್ತರ ಪದವೀಧರರಿಗೆ.
ಇದ್ಯಾವುದರ ಗೊಡವೆಯೇ ಇರದ ಬಡಜೀವಿ ಮಾತ್ರ ತನ್ನ ಪಾಡಿಗೆ ತಾನು ದುಡಿದು, ಆಯಾ ದಿನದ ದುಡಿಮೆಯಲ್ಲಿ ಊಟ ಮಾಡಿದರೆ ನೆಮ್ಮದಿ. ಬೃಹತ್ ಬಂಗಲೆಯ್ಲಲ, ಹೆಂಚಿನ ಮನೆಯ್ಲಲೂ ಕೂಡ ವಾಸವಿರದ ಬಡಪಾಯಿ ಪುಟ್ಟ ಗುಡಿಸಲಿನಲ್ಲೆ
ಜೀವನ ನಡೆಸುತ್ತಾನೆ. ಹಾಸಿಗೆ ಇದಷ್ಟು ಕಾಲು ಚಾಚಬೇಕು ಎಂಬ ಅಲಿಖಿತ ನಿಯಮ ತಿಳಿಯದಿದ್ದರೂ ಅದನ್ನು ತಿಳಿದಂತೆಯೇ ಪಾಲಿಸುವ ಆತನಿಗೆ ಪ್ರತಿದಿನವೂ ಹೊಸ ವರ್ಷವ್ದಿದಂತೆ. ಒಳ್ಳೆಯ ದುಡಿಮೆಯಾದ ದಿನದಂದು ಕುಟುಂಬ ಸದಸ್ಯರ ಜೊತೆ ಹೊಟ್ಟೆ ತುಂಬ ಊಟ ಮಾಡಿದರೆ, ಅದೇ ಹೊಸ ವರ್ಷದ ಸಂಭ್ರಮ. ಅತಿಯಾದ ಆಸೆಯೂ ಇಲ್ಲ, ನಿರಾಸೆಯೂ ಪಡಬೇಕಿಲ್ಲ.
ಹಲವು ವೈಫಲ್ಯಗಳು ಎದುರಾದರೂ ಒಂದ್ಲಿಲೊಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ ಎಂಬ ಭಾವನೆಯ್ಲಲಿ ಜೀವನ ಮಾಡುತ್ತಿರುವ ಯುವಜನರಿಗೆ ಈ ವರ್ಷ ಒಂದರ್ಥದಲ್ಲಿ ದಾರಿದೀಪ, ಅವಕಾಶಗಳ ಖಣಿಯೂ ಹೌದು. ‘ನನ್ನದು ಎಂ.ಎ ಆಗಿದೆ. ಡಿಗ್ರಿ ಪಡೆದಾಗ ತುಂಬ ಸಂತೋಷಪಟ್ಟ್ದಿದೆ. ನನ್ನ ವಿದ್ಯಾರ್ಹತೆ ಮತ್ತು ಪ್ರತಿಭೆಗೆ ಕೆಲಸ ಬೇಗನೇ ಸಿಗುತ್ತದೆ ಎಂದು ಭಾವಿಸ್ದಿದೆ. ಎಲ ಕಡೆಗೂ ಅರ್ಜಿ ಹಾಕಿದೆ. ಸಂದರ್ಶನಗಳಿಗೆ ಹಾಜರಾದೆ. ಕೇಳಿದ ಪ್ರಶ್ನೆಗಳಿಗ್ಲೆಲ ಉತ್ತರಿಸಿದೆ. ಆದರೆ ನೇಮಕಾತಿ ಪತ್ರ ನನಗೆ ಸಿಗಲ್ಲಿಲ. ಅದಕ್ಕೆ ಈಗ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತ್ದಿದೇನೆ. ಕುಟುಂಬ ನಿರ್ವಹಿಸಲಾಗದಂತಹ ವೇತನ ಸಿಗದ್ದಿದರೆ, ನಾನು ಕೆಲಸ ಮಾಡುವುದಾದರೂ ಹೇಗೆ? ಎಲರ ಮುಖದ್ಲಲೂ ಸಂತೋಷ ಕಾಣುವುದಾದರೂ ಯಾವಾಗ? ೨೦೧೦ ನಿರಾಶೆಗೊಳಿಸಿದ ಹಾಗೆ ೨೦೧೧ ಬೇಸರ ಮಾಡಿಸುವುದ್ಲಿಲ ಎಂಬ ನಂಬಿಕೆ ಇದೆ. ಈ ವರ್ಷ ಹಲವು ಕನಸುಗಳನ್ನು ನನಸು ಮಾಡುವ ಉದೇಶವಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ನಿವಾಸಿ ರಾಜಶೇಖರ್.
ನಗರದಲ್ಲಿ ವಾಸಿಸುವ ವಿದ್ಯಾವಂತ ಯುವಜನರಷ್ಟೇ ಅಲ್ಲ, ಗ್ರಾಮಗಳಲ್ಲಿರುವ ರೈತರು ಕೂಡ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ.ನವೆಂಬರ್ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಮನೆಗಳನ್ನು ಕಳೆದುಕೊಳ್ಳುವುದರ ಜೊತೆಗೆ ಆರ್ಥಿಕ ನಷ್ಟವನ್ನು ಅನುಭವಿಸಿದ ಬಹುತೇಕ ರೈತರು, ‘ಹೊಸ ವರ್ಷವು ಎಲರ ಬಾಳು-ಬದುಕಿನಲ್ಲೂ ಸುಖ ಸಂತೋಷದ ಸೆಲೆಯನ್ನು ಹರಿಸಲಿ’ ಎಂದು ಮನದಲ್ಲಿ ತಮಷ್ಟಕ್ಕೆ ತಾವೇ ಹರಕೆ ಹೊರುತ್ತಿದ್ದಾರೆ. ‘ಹೊಸ ವರ್ಷ ಎಲರಿಗೂ ಒಳ್ಳೆಯದು ಮಾಡಲಿ’ ಎಂದು ಪರಸ್ಪರ ಶುಭ ಹಾರೈಸಿಕೊಳ್ಳುತ್ತ ಸಂತೋಷದ್ಲಲಿರುವ ಪ್ರತಿಯೊಬ್ಬರು ಹೊಸ ಆಕಾಂಕ್ಷೆ ಮತ್ತು ನಿರೀಕ್ಷೆಗಳ ಈಡೇರಿಕೆಯನ್ನು ಎದುರು ನೋಡುತ್ತಿದ್ದಾರೆ.